ಮಹಾಲಿಂಗಪುರ: ಸಮೀಪದ ಮಾರಾಪುರ ಗ್ರಾಮ ರಬಕವಿ ಬನಹಟ್ಟಿ ತಾಲೂಕಿನ ಮಾರಾಪುರ ಶ್ರೀ ಪತ್ರೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ತೆರೆಕಂಡಿತು.
ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವರ ಜಾತ್ರಾ ಮಹೋತ್ಸವದ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.
ಗ್ರಾಮದ ಮುಖಂಡರು ಮಾಜಿ ಜಿಲ್ಲಾ ಪಂಚಾಯತ ಸಧ್ಯಕ್ಷ ಮಹಾಂತೇಶ್ ಹಿಟ್ಟಿನಮಠ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾದೇವ ಜಮಖಂಡಿ, ಕಾಶಿನಾಥ , ಅಣ್ಣಪ್ಪ , ಸುರೇಶ, ಸೇರಿದಂತೆ ಮುಂತಾದವರು ಜಾತ್ರೆಯ ನೇತೃತ್ವ ವಹಿಸಿದ್ದರು.
