ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
ಮಂಗಳೂರು (ಕರ್ನಾಟಕ) – ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ನಲ್ಲಿ ಮತದಾನ ಮಾಡಲು ಹೋಗುತ್ತಿದ್ದ ಹಿಂದೂ ಯುವತಿಗೆ ಮೊಹಮ್ಮದ್ ಅಜೀಂ ಎಂಬ ಯುವಕ ಕಿರುಕುಳ ನೀಡಿದ್ದಾನೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜೀಂ ಬಾಲಕಿಗೆ ಕಿರುಕುಳ ನೀಡುತ್ತಿದ್ದರಿಂದ ಬಾಲಕಿ ಬಸ್ ಚಾಲಕನ ಸಹಾಯ ಕೇಳಿದ್ದಾಳೆ. ಚಾಲಕ ಸಹಾಯ ಮಾಡದಿದ್ದಾಗ ಯುವತಿ ಯುವಕನ ಆಧಾರ್ ಕಾರ್ಡ್ ಕಸಿದುಕೊಂಡಿದ್ದಾಳೆ. ಬಸ್ ವೇಗ ಕಡಿಮೆಯಾದ ತಕ್ಷಣ ಅಜೀಂ ಕಿಟಕಿಯಿಂದ ಹಾರಿ ಪರಾರಿಯಾಗಿದ್ದಾನೆ. ಆಧಾರ್ ಕಾರ್ಡ್ ನೋಂದಣಿ ಪ್ರಕಾರ, ಅಜೀಂ ಲಾಯಿಲ್ ಗ್ರಾಮದ ಆದರ್ಶ ನಗರದ ನಿವಾಸಿ.