ಸಾಲ ತೀರಿಸಲು ಸಾಧ್ಯವಾಗದೆ ಹೇಮಾವತಿ ನಾಲೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಜಾಹೀರಾತು
iStock ಫೋಟೋ
ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಾಪತ್ತೆಯಾಗಿದ್ದ ಒಂದೇ ಕುಟುಂಬದ ಮೂವರು ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ. ಇದೊಂದು ಆತ್ಮಹತ್ಯಾ ಒಪ್ಪಂದ ಎಂದು ಪೊಲೀಸರು ಶಂಕಿಸಿದ್ದಾರೆ.
ಕೆರೆಬೀದಿ ನಿವಾಸಿಗಳಾದ ಶ್ರೀನಿವಾಸ್ (43), ಅವರ ಪತ್ನಿ ಶ್ವೇತಾ (36) ಹಾಗೂ ಅವರ ಪುತ್ರಿ ನಾಗಶ್ರೀ (13) ಮೃತ ದುರ್ದೈವಿಗಳು.
ಸಾಲ ತೀರಿಸಲು ಸಾಧ್ಯವಾಗದೆ ಹೇಮಾವತಿ ನಾಲೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಶ್ರೀನಿವಾಸ್ ಕಾರು ಚಾಲಕನಾಗಿದ್ದು, ಶ್ವೇತಾ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಈತ ವಿವಿಧ ವ್ಯಕ್ತಿಗಳಿಂದ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಆ.11ರಂದು ಕುಟುಂಬ ನಾಪತ್ತೆಯಾಗಿದ್ದು, ಆ.13ರಂದು ಸಂಬಂಧಿಕರು ಚನ್ನರಾಯಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು.
ಬುಧವಾರ ರಾತ್ರಿ ಮಾದಾಪುರ ಗ್ರಾಮದ ಬಳಿಯ ಹೇಮಾವತಿ ನಾಲೆಯಲ್ಲಿ ಶ್ರೀನಿವಾಸ್ ಮತ್ತು ಶ್ವೇತಾ ಅವರ ಶವ ಪತ್ತೆಯಾಗಿದೆ. ಚನ್ನರಾಯಪಟ್ಟಣ ಸಮೀಪದ ಕಾಲುವೆಯಲ್ಲಿ ನಾಗಶ್ರೀ ಶವ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಮಹಮ್ಮದ್ ಸುಜಿತಾ ಭೇಟಿ ನೀಡಿದ್ದಾರೆ. ನುಗ್ಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
INTRODUCING NANDINI’S GOODLIFE SPLASH to revitalise your day! 💥🍹
— KMF Nandini (@kmfnandinimilk) July 12, 2024
The go-to refreshing drink to fuel up your energy! Splash is available in delicious fruit flavours to tantalize your taste buds. ⚡️🔋#KMFNandini #Nandini #NammaKarnataka #NammaBengaluru #RefreshingDrink pic.twitter.com/Bn38Wm2IDY