ಕಲಿಯುಗದ ಅಂತ್ಯ ಯಾವಾಗ ಗೊತ್ತಾ..?

✍️ಲೇಖನ :ಮಲ್ಲಪ್ಪ ಪಟ್ಟಣಶೇಟ್ಟಿ


ನಮ್ಮ ಸುತ್ತಮುತ್ತಲು ನಡೆಯುವ ದಿನನಿತ್ಯದ ವಾತಾವರಣವನ್ನು ಗಮನಿಸಿದಾಗ ಇದು ಕಲಿಯುಗದ ಅಂತ್ಯವೇ ಎಂಬ ಪ್ರಶ್ನೆ ಕಾಡುತ್ತದೆ. ವಿಷ್ಣು ಪುರಾಣದಲ್ಲಿ ಹೇಳಲಾದ ಕಲಿಯುಗದ ಅಂತ್ಯದ ಕಥೆಗೂ ಈಗಿನ ಆಗುಹೋಗುಗಳಿಗೂ ಹೋಲಿಕೆ ಇದೆಯೇ..?

ಇತ್ತೀಚಿನ ದಿನಗಳಲ್ಲಿ ಸೂರ್ಯನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೆಚ್ಚುತ್ತಿರುವ ಈ ತಾಪಮಾನವನ್ನು ನೋಡಿದಾಗೆಲ್ಲಾ ಬಹುಶಃ ಭೂಮಿ ಸುಡುತ್ತಿದೆಯೋ ಎಂದೆನಿಸುತ್ತದೆ. ಸೂರ್ಯನ ಅತಿಯಾದ ಶಾಖವನ್ನು ನಾವು ನೈಸರ್ಗಿಕ ಪರಿಕಲ್ಪನೆಯೆಂದು ಪರಿಗಣಿಸುತ್ತೇವೆ. ವಾಸ್ತವವಾಗಿ ವಿಷ್ಣು ಪುರಾಣದಲ್ಲಿನ ಒಂದು ಅಧ್ಯಾಯನವು ಭೂಮಿಯ ಏರುತ್ತಿರುವ ತಾಪಮಾನವನ್ನು ವಿವರಿಸುತ್ತದೆ. ಇದು ಕಲಿಯುಗದ ಅಂತ್ಯ ಸಮೀಪಿಸುತ್ತಿದ್ದಂತೆ ಏನಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ.

ಕಲಿಯುಗದಲ್ಲಿ ಏನಾಗುತ್ತದೆ ಎಂಬೂದನ್ನು ಹೇಳಲಾಗಿದೆ

ಕಲಿಯುಗದಲ್ಲಿ ಯಾವೆಲ್ಲಾ ಪ್ರಕ್ರಿಯೆಗಳು, ಚಟುವಟಿಕೆಗಳು ಆಗುತ್ತದೆ ಎನ್ನುವುದನ್ನು ವಿಷ್ಣು ಪುರಾಣದಲ್ಲಿ ವಿವರಿಸಲಾಗಿದೆ. ಹಾಗೂ ಕಲಿಯುಗದಲ್ಲಿ ಜನರ ವರ್ತನೆ ಕೂಡ ಹೇಗಿರುತ್ತದೆ ಎನ್ನುವುದನ್ನೂ ಕೂಡ ಹೇಳಲಾಗಿದೆ. ಕಲಿಯುಗದಲ್ಲಿ ಜನರು ಬಿಡಿ ಕಾಸಿಗಾಗಿಯೂ ಕೂಡ ಮೋಸ ಮಾಡುವ ಗುಣವನ್ನು ಹೊಂದಿರುತ್ತಾರೆ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಹಣದ ಮೂಲಾಧಾರವಾಗಿರುತ್ತದೆ. ಹೆಣ್ಣು ಹಣವಿದ್ದರೆ ಮಾತ್ರ ಗಂಡನೊಂದಿಗೆ ಜೀವನವನ್ನು ಸಾಗಿಸುತ್ತಾಳೆ ಹಾಗೂ ಒಂದು ವೇಳೆ ತನ್ನ ಗಂಡನ ಬಳಿ ಹಣವಿಲ್ಲವೆಂದು ತಿಳಿದರೆ ಅಂದೇ ತನ್ನ ಗಂಡನನ್ನು ತ್ಯಜಿಸಿ ಬಿಡುತ್ತಾಳೆ. ಹಾಗೂ ಕೊನೆಯಲ್ಲಿ ಪ್ರಳಯವಾಗುವ ಸಾಧ್ಯತೆಗಳಿರುತ್ತದೆ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.

ಭೂಮಿಯು ತಾಮ್ರದಂತಾಗುತ್ತದೆ

ಕಲಿಯುಗದಲ್ಲಿ ಮನುಷ್ಯನ ಪಾಪ ಕರ್ಮಗಳು ಪ್ರಭಾವವು ಅತಿರೇಕಕ್ಕೇರಿದಾಗ ಸೂರ್ಯನು ಸ್ವತಃ ಏಳು ಸೂರ್ಯನ ಶಾಖವನ್ನು ಪಡೆದುಕೊಂಡು ಭೂಮಿಯನ್ನು ಆಳುತ್ತಾನೆಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಭೂಮಿಯಲ್ಲಿ ವಾಸಿಸುವ ಜೀವಿಗಳಿಗೆ, ಮನುಷ್ಯರಿಗೆ ಸೂರ್ಯನು ತಮ್ಮ ತಲೆಯ ಮೇಲೆ ಇದ್ದಾನೆನ್ನುವಷ್ಟು ಶಾಖವು ಹೆಚ್ಚಾಗುತ್ತದೆ. ಸೂರ್ಯನ ಶಾಖದಿಂದ ಭೂಮಿಯಲ್ಲಿನ ನೀರು ಬತ್ತಿ ಹೋಗಿ ಭೂಮಿಯು ತಾಮ್ರದಂತೆ ಕಾಣುತ್ತದೆ.

ಭೂಮಿಯಲ್ಲಿ ಏನಾಗುತ್ತೆ ಗೊತ್ತಾ.?

ಈಗಾಗಲೇ ಹೇಳಿರುವಂತೆ ಅತಿಯಾದ ಸೂರ್ಯನ ಶಾಖದಿಂದ ಭೂಮಿಯಲ್ಲಿ ನೀರು ಬತ್ತುತ್ತದೆ. ವರ್ಷಗಳೂ ಕಳೆದರೂ ಮಳೆ ಭೂಮಿಗೆ ಬೀಳುವುದಿಲ್ಲ. ಭೂಮಿಯ ಮೇಲೆ ವಾಸವಾಗಿರುವ ಎಲ್ಲಾ ಜೀವಿಗಳು ಕೂಡ ನೀರಿಲ್ಲದೆ ತತ್ತರಿಸುವಂತಾಗುತ್ತದೆ. ಭೂಮಿಯ ಮೇಲೆ ಬಿರುಕು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಫಲವತ್ತಾಗಿದ್ದ ಭೂಮಿಯು ಕೂಡ ಬರಡಾಗಿ ಬೆಳೆ ಬೆಳೆಯಲು ಸಾಧ್ಯವಾಗದಂತೆ ಆಗುತ್ತದೆ. ನೀರಿನ ಅನುಪಸ್ಥಿತಿಯಲ್ಲಿ ಜೀವಿಗಳು ಇನ್ನೊಂದು ಜೀವಿಯನ್ನು ಹಿಂಸಿಸಲು, ಕೊಂದು ತಿನ್ನಲು ಆರಂಭಿಸುತ್ತದೆ.

ಕಲಿಯುಗದ ಅಂತ್ಯ ಹೇಗೆ..?

ಭೂಮಿಯ ಮೇಲೆ ಮೋಸ, ಹಿಂಸಾಚಾರ, ಕೊಲೆ, ಸುಳ್ಳು, ಧರೋಡೆ ಗಳು ಹೆಚ್ಚಾದಂತೆ ಮನುಷ್ಯರ ಈ ರೌದ್ರಾವತಾರವನ್ನು ಮಟ್ಟ ಹಾಕಲು ಶ್ರೀ ಹರಿಯು ಹೊಸ ರೂಪವನ್ನು ತಾಳುತ್ತಾನೆ. ಹಾಗೂ ಶ್ರೀಹರಿಯು ಸೂರ್ಯನ ಏಳು ಕಿರಣಗಳಲ್ಲಿ ಉಪಸ್ಥಿತನಾಗಿ ಭೂಮಿಯಲ್ಲಿನ ಸಂಪೂರ್ಣ ನೀರನ್ನು ಹೀರಿಕೊಳ್ಳುತ್ತಾನೆ. ಭೂಮಿಯ ಮೇಲಿರುವ ಮನುಸಂಕುಲಕ್ಕೆ, ಜೀವಿಗಳಿಗೆ ಒಂದು ತೊಟ್ಟು ನೀರು ಕೂಡ ಸಿಗದಂತೆ ಎಲ್ಲಾ ನೀರನ್ನು ಹೀರಿಕೊಂಡು ಭೂಮಿಯನ್ನು ಸಂಪೂರ್ಣ ಗ್ರಹವನ್ನು ನೀರಿಲ್ಲದೆ ಬರಿದಾಗಿಸುತ್ತಾನೆ. ಈ ರೀತಿಯಾಗಿ ವಿಷ್ಣುವು ಸೂರ್ಯದೇವನೊಂದಿಗೆ ಲೀನನಾಗಿ ಭೂಮಿಯನ್ನು ಸಂಪೂರ್ಣ ನಾಶ ಮಾಡುತ್ತಾನೆ.

ಭೂಮಿಯ ಸ್ಥಿತಿ

ಕಲಿಯುಗದ ಅಂತ್ಯದಲ್ಲಿ ಎಲ್ಲಾ ಸಮುದ್ರ, ಸಾಗರ, ಸರೋವರ, ನದಿಗಳು ಒಣಗುತ್ತದೆ ಹಾಗೂ ಭೂಮಿಯಲ್ಲಿನ ಎಲ್ಲಾ ಮರಗಳು ಮತ್ತು ಪ್ರಾಣಿಗಳು ಸಾಯುತ್ತದೆ ಇದರಿಂದ ಭೂಮಿಯು ಆಮೆಯ ಬೆನ್ನಿನಂತೆ ಗಟ್ಟಿಯಾಗುತ್ತದೆ. ಅಲ್ಲಿ ಯಾವ ಗಿಡ, ಮರಗಳಾಗಲಿ, ಜೀವ ಸಂಕುಲಗಳಾಗಲಿ ಕಾಲಿಡಲು ಸಾಧ್ಯವಾಗುವುದಿಲ್ಲ. ಇಡೀ ಭೂಮಿಯೇ ಬೆಂಕಿಯ ಉಂಡೆಯಂತಾಗುತ್ತದೆ. ಗಿಡ ಮರಗಳಿಂದ ಕೂಡಿದ ಭೂಮಿಯಲ್ಲಿ ಎಲ್ಲಿ ನೋಡಿದರು ಅಲ್ಲಿ ಬೆಂಕಿಯೇ ಕಾಣಿಸುತ್ತದೆ. ಮನುಷ್ಯನು ಮಾಡಿದ ಪಾಪ ಕರ್ಮಗಳಿಗೆ ಸಂಪೂರ್ಣ ಜೀವ ಸಂಕುಲವೇ ನಾಶವಾಗ ಬೇಕಾಗುತ್ತದೆ.

ಮಳೆಯ ರೌದ್ರಾವತಾರ

ವಿಷ್ಣು ಪುರಾಣದಲ್ಲಿ ಹೇಳುವ ಪ್ರಕಾರ, ವಿಷ್ಣು ತನ್ನ ಅತಿಯಾದ ಸೂರ್ಯನ ಶಾಖದಿಂದ ಇಡೀ ವಿಶ್ವವನ್ನೇ ಸುಟ್ಟು ಹಾಕಿದ ನಂತರ ಭೂಮಿಯು ಬೆಂಕಿಯ ಉಂಡೆಗಳಂತೆ ರೂಪಾಂತರ ಹೊಂದುತ್ತದೆ. ಇದನ್ನು ಶಾಂತಗೊಳಿಸಲು ವಿಷ್ಣು ತನ್ನ ಬಾಯಿಯ ಮೂಲಕ ದೊಡ್ಡ ದೊಡ್ಡ ಮೋಡಗಳನ್ನು ಸೃಷ್ಟಿಸಿ, ಆ ಧೈತ್ಯ ಮೋಡಗಳಿಂದ ರಾಕ್ಷಸ ರೂಪದ ಅಂದರೆ ವಿನಾಶಕಾರಿ ಮಳೆಯು ಭೂಮಿಗೆ ಬೀಳುವಂತೆ ಮಾಡುತ್ತಾನೆ. ಆ ಮಳೆಯಿಂದ ಬೆಂಕಿಯಲ್ಲಿ ಸುಟ್ಟು ಉಳಿದ ಭಾಗಗಳೆಲ್ಲವೂ ಮುಳುಗಿ ಹೋಗುತ್ತದೆ ಹಾಗೂ ಬೆಂಕಿಯು ಕೂಡ ಆರುತ್ತದೆ. ಬೆಂಕಿಯಿಂದ ಧಗಧಗನೆ ಉರಿಯುವ ಭೂಮಿ ಸಂಪೂರ್ಣ ಜಲಾವ್ರತವಾಗುತ್ತದೆ. ನಂತರ ಬ್ರಹ್ಮ ದೇವರು ಮತ್ತೊಮ್ಮೆ ಹೊಸ ಜಗತ್ತನ್ನೇ ಸೃಷ್ಟಿಸುತ್ತಾರೆಂದು ಹೇಳಲಾಗಿದೆ.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು