ವಗಾರ (ಗುಜರಾತ್) - ಭರೂಚ್ ಜಿಲ್ಲೆಯ ವಗಾರ ತಾಲೂಕಿನ ಒಚ್ಚನ್ ಗ್ರಾಮದಲ್ಲಿ ಕಿಶನ್ ಕುಮಾರ್ ಕುಮಾವತ್ ಎಂಬ ಹಿಂದೂ ಉದ್ಯಮಿ ಮತ್ತು ಅವರ ಪತ್ನಿಯ ಮೇಲೆ ಮತಾಂಧ ಮುಸ್ಲಿಂ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಕಿಶನ್ ಕುಮಾರ್ ಶ್ರೀರಾಮ ದೇವಸ್ಥಾನದ ಹೊರಗೆ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಈ ವೇಳೆ ಸರಪಂಚ್ ಹಾಗೂ ಕಿಶನ್ ಅವರನ್ನು ರಕ್ಷಿಸಲು ಮುಂದಾದವರಿಗೂ ಥಳಿಸಿದ್ದಾರೆ. ಈ ಪ್ರಕರಣದಲ್ಲಿ 2 ಅಪ್ರಾಪ್ತರು ಸೇರಿದಂತೆ 11 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯು 21 ಏಪ್ರಿಲ್ 2024 ರ ರಾತ್ರಿ ಸಂಭವಿಸಿದೆ.
ರಾತ್ರಿ 10:30ಕ್ಕೆ ಆರೋಪಿ ಅಬ್ದುಲ್ ಅಹಮದ್ ಪಟೇಲ್ ನ ಇಬ್ಬರು ಪುತ್ರರು ಕಿಶನ್ ಅಂಗಡಿಯಿಂದ ಕೆಲವು ವಸ್ತುಗಳನ್ನು ಖರೀದಿಸಲು ಬಂದಿದ್ದರು. ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡು ಪರಸ್ಪರ ನಿಂದಿಸಿದ್ದಾರೆ. ಜಗಳವನ್ನು ನೋಡಿದ ಇತರ ಮುಸ್ಲಿಮರು ಜಮಾಯಿಸಿ ಕಿಶನ್ ಕುಮಾರ್ ಅವರನ್ನು ಥಳಿಸಿ ಅವರ ಅಂಗಡಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು.
Tags
ರಾಷ್ಟ್ರೀಯ