ದೈನಂದಿನ ಪ್ರಚಲಿತ ವಿದ್ಯಮಾನಗಳ ರಸಪ್ರಶ್ನೆ: ನವೆಂಬರ್ 14, 2024
1.ಲಾಂಗ್ ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಮಿಸೈಲ್ (LRLACM) ಅನ್ನು ಯಾವ ಸಂಸ್ಥೆಯು ಅಭಿವೃದ್ಧಿಪಡಿಸಿದೆ?
[ಎ] ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)✅
[ಬಿ] ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
[ಸಿ] ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA)
[ಡಿ] ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)
2.2024 ರಲ್ಲಿ 16 ನೇ ಇಂಡಿಯಾ ಗೇಮ್ ಡೆವಲಪರ್ ಕಾನ್ಫರೆನ್ಸ್ (IGDC) ಗಾಗಿ ಯಾವ ನಗರವು ಸ್ಥಳವಾಗಿದೆ?
[ಎ] ಜೈಪುರ
[ಬಿ] ಹೈದರಾಬಾದ್✅
[ಸಿ] ಚೆನ್ನೈ
[ಡಿ] ಭೋಪಾಲ್
3.'ಸೀ ವಿಜಿಲ್-24' ಯಾವ ದೇಶದಿಂದ ನಡೆಸಲ್ಪಟ್ಟ ರಕ್ಷಣಾ ವ್ಯಾಯಾಮವಾಗಿದೆ?
[ಎ] ಬಾಂಗ್ಲಾದೇಶ
[ಬಿ] ಶ್ರೀಲಂಕಾ
[ಸಿ] ಭಾರತ✅
[ಡಿ] ಮ್ಯಾನ್ಮಾರ್
4.ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ?
[ಎ] ಕೇರಳ
[ಬಿ] ತಮಿಳುನಾಡು
[ಸಿ] ಮಹಾರಾಷ್ಟ್ರ✅
[ಡಿ] ಕೇರಳ
5.ವಾಯೇಜರ್ 2 ಬಾಹ್ಯಾಕಾಶ ನೌಕೆಯು ಯಾವ ಬಾಹ್ಯಾಕಾಶ ಸಂಸ್ಥೆಯಿಂದ ಉಡಾವಣೆಗೊಂಡ ಮಾನವರಹಿತ ಬಾಹ್ಯಾಕಾಶ ಶೋಧಕವಾಗಿದೆ?
[ಎ] ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA)
[ಬಿ] ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (NASA)✅
[ಸಿ] ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
[ಡಿ] ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (CNSA)
ಪಂಡಿತ್ ಜವಾಹರ್ ಲಾಲ್ ನೆಹರು ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ
🔸 ಜನನ= 1889 ನವಂಬರ್ 14 ( ಇವರು ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ,)
🔸 ಜನಿಸಿದ ಸ್ಥಳ= ಉತ್ತರ ಪ್ರದೇಶ್
🔹 ತಂದೆ= ಮೋತಿಲಾಲ್ ನೆಹರು
🔸 ತಾಯಿ= ಸ್ವರೂಪರಾಣಿ
🔹 ನಿಧಾನ ಹೊಂದಿದ ವರ್ಷ=
1964 ಮೇ 27
🔸 ಸಮಾಧಿಯ ಹೆಸರು= ಶಾಂತಿವನ
🔹 ಬಿರುದುಗಳು= ಅಲಿಪ್ತ ಚಳುವಳಿ ಪಿತಾಮಹ, ಭಾರತದ ವಿದೇಶಾಂಗ ನೀತಿ ಶಿಲ್ಪಿ, ಚಾಚಾ.
🔸ಭಾರತ ರತ್ನ ಪ್ರಶಸ್ತಿ ಪಡೆದ ವರ್ಷ= 1955
🔹 ಪಂಡಿತ್ ಜವಾಹರ್ ಲಾಲ್ ನೆಹರು ಅವರು ಬರೆದ ಪುಸ್ತಕಗಳು
1) "ಡಿಸ್ಕವರಿ ಆಫ್ ಇಂಡಿಯಾ"
2) "ಗ್ಲಿಂಪ್ಸ್ ಸ್ ಅಫ್ ವರ್ಲ್ಡ್ ಹಿಸ್ಟರಿ"
3) "ಟು ವರ್ಡ್ ಫ್ರೀಡಂ"
🔸 ನೆಹರೂರವರು ಲೋಕಸಭಾ ಕ್ಷೇತ್ರ= ಉತ್ತರಪ್ರದೇಶ ಫುಲ್ ಫುರ್
🔹 ಭಾರತದ ಮೊದಲ ಪ್ರಧಾನಿ= ಪಂಡಿತ್ ಜವಾಹರಲಾಲ್ ನೆಹರು
🔸 ಯೋಜನಾ ಆಯೋಗದ ಮೊದಲ ಅಧ್ಯಕ್ಷರು= ಜವಾಹರಲಾಲ್ ನೆಹರು
🔹 ನೆಹರು ಅವರು ಕನಿಷ್ಠ ಕೂಲಿ ಜಾರಿಗೆ ತಂದ ವರ್ಷ= 1948
🔸 ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ= 1950 ಮಾರ್ಚ್ 15
🔹 ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ವರ್ಷ= 1952 ಆಗಸ್ಟ್ 6
🔸 ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಜಾರಿಯಾದ ವರ್ಷ= 1952
🔹 ಮೊದಲ ಪಂಚವಾರ್ಷಿಕ ಯೋಜನೆ ಪ್ರಾರಂಭವಾದ ವರ್ಷ= 1951-1956
🔸 ಪಂಚ ಶೀಲಒಪ್ಪಂದ = 1954 ಎಪ್ರಿಲ್ 28( ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಚೀನಾದ ಅಧ್ಯಕ್ಷ ಚೌ,ಎನ್.ಲಾಯ್
(TET-2021)
🔹 ಸಿಂಧೂ ನದಿ ಒಪ್ಪಂದ ಭಾರತ ಪ್ರಧಾನಿ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಆಯೊಬ್ ಖಾನ್
🔸 ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಾದ ವರ್ಷ= 1961
🔹 ಭಾರತ ಮತ್ತು ಚೀನಾ ಯುದ್ಧ= 1962
🔹 ಸಂವಿಧಾನ ರಚನಾ ಸಭೆಯಲ್ಲಿನ ಕೇಂದ್ರ ಸಂವಿಧಾನದ ಸಮಿತಿಯ ಅಧ್ಯಕ್ಷರು= ನೆಹರು
🔸 ಜವಾಹರ್ ಲಾಲ್ ನೆಹರುರವರು 1929 ಲಾಹೋರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ವಹಿಸಿದ್ದರು, ಇಲ್ಲಿ ಪೂರ್ಣ ಸ್ವರಾಜ್ಯ ಘೋಷಣೆ ಮಾಡಲಾಯಿತು.
🔹 ಜವಾಹರ್ ಲಾಲ್ ನೆಹರುರವರು ಅಕ್ಬರನನ್ನು ರಾಷ್ಟ್ರೀಯ ದೊರೆ ಎಂದು ಕರೆದಿದ್ದಾರೆ
🔸 ಅಕ್ಬರನು ಗುಜರಾತ್ ಮೇಲೆ ದಾಳಿ ಮಾಡಿದ್ದನ್ನು ಈ ದಾಳಿಯನ್ನು ನೆಹರೂರವರು ಶೀಘ್ರಗತಿಯ ದಾಳಿ ಎಂದು ಕರೆದಿದ್ದಾರೆ.
ಮಕ್ಕಳ ದಿನಾಚರಣೆ
ಜವಾಹರಲಾಲ್ ನೆಹರು ಜಯಂತಿ.
ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ನವೆಂಬರ್ 14 ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ನೆನಪಿಗೆ, ಅವರಿಗೆ ಗೌರವವಾಗಿ ಆಚರಿಸಲಾಗುತ್ತದೆ. ಇವರನ್ನು ಮಕ್ಕಳೆಲ್ಲರು ಚಾಚಾ ನೆಹರೂ ಎಂದು ಪ್ರೀತಿಯಿಂದ ಕರೆಯುತ್ತಾರೆ, ನೆಹರು ಅವರು ಮಕ್ಕಳು ಶಿಕ್ಷಣವನ್ನು ಪೂರೈಸಬೇಕೆಂದು ಸಲಹೆ ನೀಡಿದರು. ಈ ದಿನದಂದು ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಜವಾಹರಲಾಲ್ ನೆಹರು ಅವರು ತಮ್ಮ ಜೀವನದುದ್ದಕ್ಕೂ ಮಕ್ಕಳನ್ನು ಅವರ ಜಾತಿ, ಮತ, ಧರ್ಮ, ಸಂಸ್ಕೃತಿ ಅಥವಾ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಮೆಚ್ಚಿದರು ಮತ್ತು ಪ್ರೀತಿಸುತ್ತಿದ್ದರು. ಮಕ್ಕಳು ರಾಷ್ಟ್ರದ ಭವಿಷ್ಯವಾಗಿರುವುದರಿಂದ ಅವರನ್ನು ಸಂಸ್ಕಾರವಂತರನ್ನಾಗಿಸಿ ಉತ್ತಮ ಶಿಕ್ಷಣ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಭಾರತದಲ್ಲಿ ಮಕ್ಕಳ ದಿನಾಚರಣೆಯ ಆಚರಣೆಯು 1956 ರ ಹಿಂದಿನದು. ಭಾರತವು ಮಕ್ಕಳ ದಿನವನ್ನು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಆಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ಅವರ ನೆನಪಿಗಾಗಿ ಅವರ ಜನ್ಮ ದಿನಾಚರಣೆಯನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ.
ಮಕ್ಕಳ ದಿನಾಚರಣೆಯ ವೈಭವ ಮತ್ತು ಪ್ರದರ್ಶನದ ನಡುವೆ ಚಾಚಾ ನೆಹರೂ ಅವರ ಸಂದೇಶವನ್ನು ನಾವು ಮರೆಯಬಾರದು. ಅದೆಂದರೆ ಮಕ್ಕಳಿಗೆ ಅವರ ಬೆಳವಣಿಗೆಗೆ ಸುರಕ್ಷಿತ ಮತ್ತು ಪ್ರೀತಿಯ ಪರಿಸರ ಇರಬೇಕು. ಅದಲ್ಲದೆ ಅವರಿಗೆ ಸಾಕಷ್ಟು ಮತ್ತು ಸಮಾನ ಅವಕಾಶಗಳನ್ನು ಪೂರೈಸಿ ಅವರಿಂದ ದೇಶದ ಪ್ರಗತಿಗೆ ಕೊಡುಗೆ ಪಡೆಯಬಹುದು. ಈ ದಿನವು ನಮ್ಮಲ್ಲಿನ ಪ್ರತಿಯೊಬ್ಬರಿಗೂ ಮಕ್ಕಳ ಕಲ್ಯಾಣದ ಬಗೆಗಿನ ನಮ್ಮ ಬದ್ದತೆಯನ್ನು ಪುನರ್ ನವೀಕರಿಸಲು ನೆನಪು ಮಾಡುವುದು ಮತ್ತು ಮಕ್ಕಳಿಗೆ ಅವರ ಚಾಚಾ ನೆಹರುವಿನ ಆದರ್ಶದಂತೆ ಮತ್ತು ಅವರ ಮಾದರಿಯಲ್ಲಿ ಬದುಕಲು ಕಲಿಸಬೇಕು.
ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಯ್ದುಕೊಳ್ಳಲು ಕಾರಣ ನೆಹರು ಅವರಿಗೆ ಮಕ್ಕಳ ಬಗೆಗಿನ ಅಪಾರ ಪ್ರೀತಿ ಮತ್ತು ಮೋಹ. ಅಲ್ಲದೆ ನೆಹರು ಅವರು ಕೂಡಾ ದೇಶದ ವಿಶೇಷ ಮಗುವೆಂದೆ ಪರಿಗಣಿಸಬಹುದು. ಸ್ವಾತಂತ್ರ ಹೋರಾಟದಲ್ಲಿ ಅಪಾರವಾಗಿ ಬಹುಕಾಲ ಶ್ರಮಿಸಿದವರು. ಅದಕ್ಕೆ ಭಾರತದಲ್ಲಿ 14 ನೆ ನವಂಬರ್ ಅನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುವರು. ಈ ದಿನ ಭಾರತದ ದಂತ ಕಥೆಯಾದ ಸ್ವಾತಂತ್ರ ಹೋರಾಟಗಾರ ಮತ್ತು ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರ ಲಾಲ ನೆಹರು ಅವರ ಜನ್ಮದಿನ.
ಈ ದಿನ ನಾವು ಮಕ್ಕಳ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿ ಬದ್ಧತೆಯಿಂದ ಚಾಚಾ ನೆಹರೂ ಅವರ ಕನಸಿನಂತೆ ಮಕ್ಕಳು ಉತ್ತಮ ಗುಣಮಟ್ಟದ ಜೀವನ ನಡೆಸಲು ಅನುವಾಗುವಂತೆ ಮಾಡಬೇಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.