1.ಗ್ರಾ.ಪಂ. ವರಮಾನ ₹1,272.43 ಕೋಟಿಗೆ ಏರಿಕೆಯಾಗಿದ್ದು ಸಾರ್ವಕಾಲಿಕ ದಾಖಲೆಯಾಗಿದೆ
ಗ್ರಾಮ ಪಂಚಾಯಿತಿಗಳ ವರಮಾನ 2024-25ನೇ ಸಾಲಿನಲ್ಲಿ ₹1.272.43 ಕೋಟಿಗೆ ಏರಿಕೆಯಾಗಿದೆ. ಇದು ಸಾರ್ವಕಾಲಿಕ ದಾಖಲೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
2022-23 ₹571.94 3, 2023-24 ಸಾಲಿನಲ್ಲಿ ₹767.87 ಕೋಟಿ ಸಂಗ್ರಹಿಸಿದೆ. 2024-25ನೇ ಸಾಲಿನಲ್ಲಿ ಹಿಂದಿನ ವರ್ಷಕ್ಕಿಂತಲೂ ₹500 ಕೋಟಿ ಹೆಚ್ಚು ಸಂಗ್ರಹ ಆಗಿದೆ' ಎಂದು ಅವರು ಹೇಳಿದ್ದಾರೆ.
'ಕಳೆದ 18 ತಿಂಗಳುಗಳಲ್ಲಿ 13,91,678 ಹೊಸ ಆಸ್ತಿಗಳನ್ನು ತೆರಿಗೆ ನೋಂದಣಿ ವ್ಯಾಪ್ತಿಗೆ ತರುವ ಮೂಲಕ ಪಂಚಾಯತ್ ಆಸ್ತಿಗಳನ್ನು 1,43,91,438ಕ್ಕೆ ಹೆಚ್ಚಿಸಿದ್ದೇವೆ. ಗ್ರಾಮೀಣ ಆಸ್ತಿ ನಿರ್ವಹಣಾ ವೇದಿಕೆಯಾದ 'ಇ-ಸ್ವತ್ತು' ಹಾದಿಯಲ್ಲಿ ಮಾಡಿರುವ ಸುಧಾರಣೆಗಳ ಜೊತೆಗೆ ಇನ್ನೂ ಹೆಚ್ಚಿನ ಆದಾಯ ಸಂಗ್ರಹಿಸಲು ಪಂಚಾಯತ್ಗಳಿಗೆ ನೀಡಲಾಗುತ್ತಿದೆ' ಎಂದೂ ಅವರು ಹೇಳಿದ್ದಾರೆ. ಹೆಚ್ಚು ಅಧಿಕಾರ
2.ಕರ್ನಾಟಕದ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ (GIA) ಗೆ ಸೇರ್ಪಡೆಗೊಂಡ ಮೊದಲ ಲ್ಯಾಟಿನ್ ಅಮೇರಿಕನ್ ರಾಷ್ಟ್ರವಾದ ಚಿಲಿ
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಅಂತರರಾಷ್ಟ್ರೀಯ ಸಹಯೋಗವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿ, ಕರ್ನಾಟಕ ಸರ್ಕಾರವು ಏಪ್ರಿಲ್ 5 ರಂದು ಚಿಲಿ ಸರ್ಕಾರದೊಂದಿಗೆ ಉದ್ದೇಶ ಪತ್ರಕ್ಕೆ (ಲೆಟರ್ ಆಫ್ ಇಂಟೆಂಟ್ Lol) ಗೆ ಸಹಿ ಹಾಕಿತು.
ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಮತ್ತು ಅವರ ನಿಯೋಗದ ಅಧಿಕೃತ ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ನಾವೀನ್ಯತೆ ಶೃಂಗಸಭೆಯ ಸಂದರ್ಭದಲ್ಲಿ ಈ ಒಪ್ಪಂದವನ್ನು ಔಪಚಾರಿಕಗೊಳಿಸಲಾಯಿತು.
ಈ ಮೂಲಕ ಕರ್ನಾಟಕದ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ (GIA) ಗೆ ಸೇರ್ಪಡೆಗೊಂಡ ಮೊದಲ ಲ್ಯಾಟಿನ್ ಅಮೇರಿಕನ್ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಚಿಲಿ ಪಾತ್ರವಾಗಿದೆ. ಸಂಶೋಧನೆ ಮತ್ತು ಉದ್ಯಮಶೀಲತೆಯಲ್ಲಿ ಗಡಿಯಾಚೆಗಿನ ಸಹಯೋಗವನ್ನು ಉತ್ತೇಜಿಸಲು 30 ಕ್ಕೂ ಹೆಚ್ಚು ದೇಶಗಳನ್ನು ಒಟ್ಟುಗೂಡಿಸುವ ಈ ಉಪಕ್ರಮವು ಕರ್ನಾಟಕದ ತಾಂತ್ರಿಕ ಪ್ರಗತಿಗೆ ಜಾಗತಿಕ ಕೇಂದ್ರವಾಗಿ ಕರ್ನಾಟಕದ ಪಾತ್ರವನ್ನು ಬಲಪಡಿಸುವ ಗುರಿಯನ್ನು ಈ ಮೈತ್ರಿಕೂಟ ಹೊಂದಿದೆ. ವಿಶ್ವಾದ್ಯಂತದ ದೇಶಗಳೊಂದಿಗೆ ಪಾಲುದಾರಿಕೆಯನ್ನು ಬೆಳೆಸುವುದು ಇದರ ಉದ್ದೇಶವಾಗಿದೆ.
ಸಾಲಿನಲ್ಲಿ ದಾಖಲೆ' ಪ್ರಿಯಾಂಕ್
23-24 ಸಾಲಿನಲ್ಲಿ ' ಎಂದು
ಶೃಂಗಸಭೆಯ ಸಂದರ್ಭದಲ್ಲಿ, ಅಧ್ಯಕ್ಷ ಬೋರಿಕ್ ಅವರು ಪಾಲುದಾರಿಕೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. ಚಿಲಿಯ ಬೆಳೆಯುತ್ತಿರುವ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಎತ್ತಿ ತೋರಿಸಿದರು ಮತ್ತು ಕರ್ನಾಟಕದ ನವೋದ್ಯಮಗಳು ಮತ್ತು ತಂತ್ರಜ್ಞಾನ ಕಂಪನಿಗಳನ್ನು ದಕ್ಷಿಣ ಅಮೆರಿಕಾದಲ್ಲಿ ಅವಕಾಶಗಳನ್ನು ಅನ್ವೇಷಿಸಲು ಆಹ್ವಾನಿಸಿದರು. ಜಾಗತಿಕ ಸಹಯೋಗಗಳಿಗೆ ಚಿಲಿಯ ಬದ್ಧತೆ ಮತ್ತು ವಿದೇಶಿ ಉದ್ಯಮಗಳಿಗೆ ಅದರ ಮುಕ್ತತೆಯನ್ನು ಅವರು ಒತ್ತಿ ಹೇಳಿದರು.
3.ಕೋವಿಡ್ ಅಕ್ರಮ: 1808 ಪುಟಗಳ ಎರಡನೇ ವರದಿ ಸಲ್ಲಿಕೆ
ವರದಿಯು ಏಳು ಸಂಪುಟಗಳಲ್ಲಿದ್ದು, 1,808 ಪುಟಗಳನ್ನು ಒಳಗೊಂಡಿದೆ. ಅದರಲ್ಲಿನ ನಾಲ್ಕು ಸಂಪುಟಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಡೆದ ಹಗರಣಗಳ ಮಾಹಿತಿಯನ್ನು ಒಳಗೊಂಡಿದೆ. ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯ, ದಕ್ಷಿಣ ವಲಯ, ಪಶ್ಚಿಮ ವಲಯ, ಯಲಹಂಕ ವಲಯಗಳ ಹಗರಣಗಳಿಗೆ ಸಂಬಂಧಪಟ್ಟ ವಿವರಗಳು ಪ್ರತ್ಯೇಕ ಸಂಪುಟಗಳಲ್ಲಿವೆ.
ಉಳಿದ ಮೂರು ಸಂಪುಟಗಳು ಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ ಜಿಲ್ಲೆ ಮತ್ತು ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಹಗರಣಗಳ ಮಾಹಿತಿ ಒಳಗೊಂಡಿದೆ.
ಮೊದಲ ಮಧ್ಯಂತರ ವರದಿ 1,500 ಪುಟಗಳನ್ನು ಒಳಗೊಂಡಿತ್ತು. ಅದು ಕೋವಿಡ್ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು, ಅಧಿಕಾರಿಗಳ ಶಿಫಾರಸುಗಳನ್ನು ಬದಿಗೊತ್ತಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇದರಿಂದ ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ವರದಿಯಲ್ಲಿ ಶಿಫಾರಸು ಮಾಡಿತ್ತು.
4.ಅಮೆರಿಕದ ಪ್ರತಿಸುಂಕದಿಂದ ಕರ್ನಾಟಕದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಇಳಿಕೆಯಾಗುವ ಆತಂಕ
ಆಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ಶೇ 26ರಷ್ಟು ಪ್ರತಿ ಸುಂಕ ವಿಧಿಸಿರುವುದು ಕರ್ನಾಟಕದ ವ್ಯಾಪಾರ ವಹಿವಾಟಿಗೂ ತಟ್ಟಲಿದ್ದು. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಇಳಿಕೆಯಾಗುವ ಆತಂಕ ಎದುರಾಗಿದೆ.
ಸದ್ಯ ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ಬಳಿಕ ರಾಜ್ಯವು ಎರಡನೇ ಸ್ಥಾನದಲ್ಲಿದೆ.
'ಅಮೆರಿಕದ ಸುಂಕ ನೀತಿಯು ರಾಜ್ಯದ ಆರ್ಥಿಕತೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಈಗಲೇ ಲೆಕ್ಕ ಹಾಕುವುದು ಅಥವಾ ಅಂದಾಜು ಮಾಡುವುದು ಸುಲಭದ ಕೆಲಸವಲ್ಲ. ಆದರೆ, ಇದು ಪರೋಕ್ಷವಾಗಿ ಉದ್ಯೋಗ ಮತ್ತು ನಿಯಮಿತ ವ್ಯಾಪಾರದ ಜಿಎಸ್ಟಿ ಸಂಗ್ರಹದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಅದನ್ನು ತಕ್ಷಣಕ್ಕೆ ಅಂದಾಜು ಮಾಡಲು ಸಾಧ್ಯವಿಲ್ಲ' ಎನ್ನುತ್ತಾರೆ ಹಣಕಾಸು ಇಲಾಖೆಯ ಕಾರ್ಯದರ್ಶಿ ಪಿ.ಸಿ. ಜಾಫರ್.
5.ಸಕ್ಕರೆ ಉತ್ಪಾದನೆ: ರಾಜ್ಯಕ್ಕೆ 3ನೇ ಸ್ಥಾನ
ರಾಜ್ಯವು ಈ ಬಾರಿ ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಮಳೆ ಕೊರತೆಯಿದ್ದರೂ ಉತ್ಪಾದನೆ ಹೆಚ್ಚಾಗಿದ್ದು ವಿಶೇಷ' ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
'ಮುಂಬರುವ ಹಂಗಾಮಿನಲ್ಲಿ 6 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸುವ ಗುರಿಯಿದ್ದು, ಹೊಸ ಆವಿಷ್ಕಾರಗಳ ಕುರಿತು ತಜ್ಞರು ತಾಂತ್ರಿಕ ಸಮಾವೇಶ ನಡೆಸಿ ಮಾರ್ಗದರ್ಶನ ಮಾಡಿದ್ದಾರೆ. ರಾಜ್ಯದಲ್ಲಿ 80 ಸಕ್ಕರೆ ಕಾರ್ಖಾನೆಗಳಿವೆ. 3 ಮುಚ್ಚಿದ ಸಕ್ಕರೆ ಕಾರ್ಖಾನೆ ಗಳನ್ನು ಪುನರಾರಂಭಕ್ಕೆ ಪ್ರಯತ್ನಿಸಲಾಗುವುದು' ಎಂದು ಅವರು ತಿಳಿಸಿದರು.
ರಾಷ್ಟ್ರೀಯ
6. ಸೇನಾ ಸೇವೆಯ ನಂತರ ಹರಿಯಾಣ ಪೊಲೀಸ್ ನೇಮಕಾತಿಯಲ್ಲಿ ಅಗ್ನಿವೀರರಿಗೆ 20% ಮೀಸಲಾತಿ
ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ರಾಜ್ಯದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಅಗ್ನಿವೀರರಿಗೆ 20% ಮೀಸಲಾತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಜುಲೈ 2024 ರಲ್ಲಿ, ಸರ್ಕಾರವು ಕಾನ್ ಸ್ಟೆಬಲ್ಗಳು, ಅರಣ್ಯ ರಕ್ಷಕರು ಮತ್ತು ಜೈಲು ವಾರ್ಡನ್ಗಳ ನೇಮಕಾತಿಯಲ್ಲಿ ಅಗ್ನಿವೀರರಿಗೆ 10% ಮೀಸಲಾತಿಯನ್ನು ಮತ್ತು ಇತರ ಹುದ್ದೆಗಳಲ್ಲಿ ಕೋಟಾಗಳನ್ನು ಘೋಷಿಸಿತ್ತು.
ಸಶಸ್ತ್ರ ಪಡೆಗಳಲ್ಲಿ ಸೇವಾ ಅವಧಿಯ ನಂತರ ಉದ್ಯೋಗಗಳಿಗೆ ಅವಕಾಶ ಕಲ್ಪಿಸುವ ಮೂಲಕ ಆಗ್ನಿವೀರರ ಭವಿಷ್ಯವನ್ನು ಸುರಕ್ಷಿತಗೊಳಿಸಿದ ದೇಶದ ಮೊದಲ ರಾಜ್ಯ ಹರಿಯಾಣ ಎಂದು ಹೇಳಿದರು.
ಹರಿಯಾಣ ಆಗ್ನಿವೀರ್ ನೀತಿ-2024 ಅನ್ನು ಜಾರಿಗೆ ತರುವ ಮೂಲಕ ಹರಿಯಾಣ ಸಚಿವ ಸಂಪುಟ ಈಗಾಗಲೇ ಅಗ್ನಿವೀರ್ಗಳಿಗೆ ಭದ್ರತಾ ರಕ್ಷಣೆಯನ್ನು ಒದಗಿಸಿದೆ.
ಸೇನೆಯಲ್ಲಿನ ಸೇವಾ ಅವಧಿಯ ನಂತರ ಅಗ್ನಿವೀರರು ರಾಜ್ಯದಲ್ಲಿ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಇದಕ್ಕಾಗಿ ಅವರು ತಮ್ಮನ್ನು ನೋಂದಾಯಿಸಿಕೊಳ್ಳಲು ಪ್ರತ್ಯೇಕ ಪೋರ್ಟಲ್ ಅನ್ನು ರಚಿಸಲಾಗುವುದು. ಇದರ ನಂತರ, ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಅವರಿಗೆ ಉದ್ಯೋಗಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ಸೈನಿ ಹೇಳಿದರು.
ಸಭೆಯಲ್ಲಿ, 2023-24ರಲ್ಲಿ ಹರಿಯಾಣದಿಂದ 2,893 ಅಗ್ನಿವೀರರನ್ನು ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ನೇಮಕ ಮಾಡಿಕೊಳ್ಳಲಾಗಿದೆ ಮತ್ತು 2022-23ರಲ್ಲಿ 2,227 ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸೈನಿ ಮಾಹಿತಿ ನೀಡಿದರು.
7.ಭಾರತ ಕಳೆದ ದಶಕದಲ್ಲಿ ವಾರ್ಷಿಕ ಸರಾಸರಿ 600-1,200 ಶಾಖದ ಹೊಡೆತದ ಸಾವುಗಳನ್ನು ಅಧಿಕೃತವಾಗಿ ದಾಖಲಿಸಿದೆ; ಆದರೂ ಈ ವರ್ಷದಿಂದ ಗೋವಾ ಶಾಲಾ ಶೈಕ್ಷಣಿಕ ವರ್ಷ ಬಿರು ಬಿಸಿಲಿನ ಏಪ್ರಿಲಿನಲ್ಲಿ ಆರಂಭ
ಗೋವಾದಲ್ಲಿ ಜಾರಿಗೆ ತರಲಾದ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಶೈಕ್ಷಣಿಕ ವರ್ಷವನ್ನು ಜೂನ್ ಬದಲಿಗೆ ಏಪ್ರಿಲ್ನಲ್ಲಿ ಪ್ರಾರಂಭಿಸಲಿದೆ.
ಭಾರತ ಕಳೆದ ದಶಕದಲ್ಲಿ ವಾರ್ಷಿಕ ಸರಾಸರಿ 600-1,200 ಶಾಖದ ಹೊಡೆತದ ಸಾವುಗಳನ್ನು ಅಧಿಕೃತವಾಗಿ ದಾಖಲಿಸಿದೆ. ತೀವ್ರ ಶಾಖದ ಅಲೆಯ ವರ್ಷಗಳಲ್ಲಿ (ಉದಾ, 2015ರಲ್ಲಿ 2,081 ಸಾವು) ಗರಿಷ್ಠ ಮಟ್ಟ ತಲುಪಿದೆ. ಹವಾಮಾನ ಬದಲಾವಣೆಯು ಶಾಖದ ಅಲೆಗಳನ್ನು ತೀವ್ರಗೊಳಿಸಿದ್ದು ಸಾವಿನ ಸಂಖ್ಯೆ ಹೆಚ್ಚಿಸಿದೆ.
ಬಿರು ಬಿಸಿಲಿನ ನಡುವೆ ಮಕ್ಕಳಿಗೆ ಸೂರ್ಯಾಘಾತ ಆಗುವ ಭೀತಿ ಇದ್ದರೂ ಗೋವಾ ಶಾಲಾ ಶೈಕ್ಷಣಿಕ ವರ್ಷ ಬಿರು ಬಿಸಿಲಿನ ಏಪ್ರಿಲಿನಲ್ಲಿ ಆರಂಭಿಸುತ್ತಿದೆ
8.ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಪಂಬನ್ ಸಮುದ್ರ ಸೇತುವೆ ಲೋಕಾರ್ಪಣೆ
ರಾಮೇಶ್ವರ ದ್ವೀಪವನ್ನು ರೈಲು ಮೂಲಕ ಸಂಪರ್ಕಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಭಾರತದ ಮೊದಲ 'ಲಿಫ್ಟ್ ಸೇತುವೆ' ಪಂಬನ್ ಲಿಫ್ಟ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.
ರಾಮೇಶ್ವರಂ-ತಂಬರಂ (ಚೆನ್ನೈ) ನಡುವೆ ಹೊಸ ರೈಲು ಸೇವೆಗೆ ಇದೇ ವೇಳೆ ಚಾಲನೆ ನೀಡಿದ ಪ್ರಧಾನಿ, ಸೇತುವೆಯ ಕೆಳಗಿನಿಂದ ಸಂಚರಿಸಿದ ಕರಾವಳಿ ಕಾವಲು ಪಡೆಯ ಹಡಗಿಗೂ ಹಸಿರು ನಿಶಾನೆ ತೋರಿದರು.
ಉದ್ಘಾಟನೆ ನಂತರ ಕೆಳಕ್ಕೆ ಇಳಿಸುವಾಗ ಅಸಮಾನವಾಗಿ ಇಳಿದು ಮಧ್ಯದ ಸ್ಪ್ಯಾನ್ ಸುಮಾರು 30 ನಿಮಿಷಗಳ ಕಾಲ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿತು. ಘಟನೆಯ ಸಮಯದಲ್ಲಿ, ಲಿಫ್ಟ್ ಸ್ಪ್ಯಾನ್ ನ ಪಂಬನ್-ಕಡೆಯ ಭಾಗವು ಸಿಲುಕಿಕೊಂಡಾಗ, ಇನ್ನೊಂದು ತುದಿ (ಮಂಟಪ ಕಡೆಯ ಭಾಗ) ಆಸಮಾನವಾಗಿ ಕೆಳಕ್ಕೆ ಇಳಿಯಿತು. ಇದರಿಂದಾಗಿ ಸ್ಕ್ಯಾನ್ ಓರೆಯಾದ ಸ್ಥಾನದಲ್ಲಿ ಉಳಿಯಿತು.
ಸುಮಾರು 30 ನಿಮಿಷಗಳ ದೋಷನಿವಾರಣೆಯ ನಂತರ, ಅಧಿಕಾರಿಗಳು ಲಿಫ್ಟ್ ಅನ್ನು ಮತ್ತೆ ಕೆಳಕ್ಕೆ ತರುವಲ್ಲಿ ಯಶಸ್ವಿಯಾದರು.